1. Home
  2. Belthangady
  3. ಬೆಳ್ತಂಗಡಿ ‌: ಬೆಳ್ಳಂಬೆಳಗ್ಗೆ ಅಣಿಯೂರು ಪೇಟೆಯಲ್ಲಿ ಕಾಡಾನೆ ಪ್ರತ್ಯಕ್ಷ – ಸ್ಥಳೀಯ ಜನರಲ್ಲಿ ಮೂಡಿದೆ ಆತಂಕ

ಬೆಳ್ತಂಗಡಿ ‌: ಬೆಳ್ಳಂಬೆಳಗ್ಗೆ ಅಣಿಯೂರು ಪೇಟೆಯಲ್ಲಿ ಕಾಡಾನೆ ಪ್ರತ್ಯಕ್ಷ – ಸ್ಥಳೀಯ ಜನರಲ್ಲಿ ಮೂಡಿದೆ ಆತಂಕ

ಬೆಳ್ತಂಗಡಿ ‌: ಬೆಳ್ಳಂಬೆಳಗ್ಗೆ ಅಣಿಯೂರು ಪೇಟೆಯಲ್ಲಿ ಕಾಡಾನೆ ಪ್ರತ್ಯಕ್ಷ – ಸ್ಥಳೀಯ ಜನರಲ್ಲಿ ಮೂಡಿದೆ ಆತಂಕ
0

ನ್ಯೂಸ್ ಆ್ಯರೋ‌ : ಬೆಳ್ತಂಗಡಿ ತಾಲೂಕಿನ ಅಣಿಯೂರು ಪೇಟೆಯ ಸಮೀಪದ ನದಿಯಲ್ಲಿ ಇಂದು ಬೆಳಿಗ್ಗೆ ಕಾಡಾನೆಯೊಂದು ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಈ ಪ್ರದೆಶದಲ್ಲಿ ಕಳೆದ ಕೆಲವು ಸಮಯದಿಂದ ಒಂಟಿ ಸಲಗವೊಂದು ರಾತ್ರಿ ವೇಳೆ ಕೃಷಿ ನಾಶ ಮಾಡುತ್ತಿತ್ತು. ಇದೀಗ ಹಗಲು ಹೊತ್ತಿನಲ್ಲಿಯೇ ಪೇಟೆಬದಿಯಲ್ಲಿ ಕಾಡಾನೆ ಕಾಣಿಸಿಕೊಂಡಿರುವುದು ಜನರಲ್ಲಿ ಭಯ ಮೂಡಿಸಲು ಕಾರಣವಾಗಿದೆ.

ನದಿಯಲ್ಲಿ ಕಾಡಾನೆ ತಿರುಗಾಡುತ್ತಿದ್ದು ನದಿ ಬದಿಯ ತೋಟಗಳಿಗೆ ಹಾನಿಯುಂಟು ಮಾಡುತ್ತಿದೆ. ಅರಣ್ಯ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದ್ದು, ಅವರ‌ ಭೇಟಿ ನಿರೀಕ್ಷಿಸಲಾಗಿದೆ..