ಎಲ್ಪಿಜಿ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಸಿಗಲಿದೆ ಅನಿಲ ಭಾಗ್ಯ – ಅರ್ಜಿ ಸಲ್ಲಿಸಲು ಹೀಗೆ ಮಾಡಿ..

ನ್ಯೂಸ್ ಆ್ಯರೋ : ರಾಜ್ಯ ಸರ್ಕಾರವು ಬಿಪಿಎಲ್ ಕುಟುಂಬಗಳಿಗೆ ಉಚಿತ ಎಲ್ಪಿಜಿ ಸಂಪರ್ಕ ಒದಗಿಸುವ ಉದ್ದೇಶದಿಂದ ಅನಿಲ ಭಾಗ್ಯ ಯೋಜನೆ ಆರಂಭಿಸಿದ್ದು, ಈ ಯೋಜನೆಯಡಿ, ಕರ್ನಾಟಕ ಸರ್ಕಾರವು ಉಚಿತ ಎಲ್ಪಿಜಿ ಗ್ಯಾಸ್ ಕನೆಕ್ಷನ್ ಜೊತೆಗೆ ಡಬಲ್ ಗ್ಯಾಸ್ ಬರ್ನರ್ ಸ್ಟವ್ ಮತ್ತು ಎರಡು ಸಿಲಿಂಡರ್ ರೀಫಿಲ್ಗಳನ್ನು ಪ್ರತಿ ಫಲಾನುಭವಿಗೆ ವಿಶೇಷವಾಗಿ ಬಿಪಿಎಲ್ ಕುಟುಂಬಗಳಿಗೆ ನೀಡುತ್ತದೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ.
ಯೋಜನೆಯ ಸೌಲಭ್ಯಗಳು
ಅನಿಲ ಭಾಗ್ಯ ಎಲ್ಪಿಜಿ ಯೋಜನೆಯಡಿ, ರಾಜ್ಯ ಸರ್ಕಾರವು ರಾಜ್ಯದ ಫಲಾನುಭವಿಗಳಿಗೆ ಉಚಿತ ಎಲ್ಪಿಜಿ ಸಂಪರ್ಕ ಒದಗಿಸಲಿದ್ದು, ಡಬಲ್ ಗ್ಯಾಸ್ ಬರ್ನರ್ ಸ್ಟೌ ಸಿಗಲಿದೆ. ಇದರೊಂದಿಗೆ 2 ಸಿಲಿಂಡರ್ ರೀಫಿಲ್ ಕೂಡ ಲಭ್ಯವಾಗಲಿದ್ದು, ಫಲಾನುಭವಿಗಳು ಆನ್ಲೈನ್ ಅಥವಾ ಆಫ್ಲೈನ್ ಮೋಡ್ಗಳ ಮೂಲಕ ಅನಿಲಾ ಭಾಗ್ಯ ಸ್ಕೀಮ್ ನೋಂದಣಿಗಳನ್ನು ಮಾಡುವ ಮೂಲಕ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಇನ್ನೂ ಈ ಸ್ಕೀಮ್ಗಾಗಿ ಅರ್ಜಿ ನಮೂನೆಗಳನ್ನು ಆನ್ಲೈನ್ ಮೋಡ್ ಮೂಲಕ ಆಹ್ವಾನಿಸಲಾಗುತ್ತದೆ.
ಅರ್ಜಿಗಳನ್ನು ಸಲ್ಲಿಸಿದ ನಂತರ, ಸರ್ಕಾರವು ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲು ಸುಮಾರು 30 ದಿನ ತೆಗೆದುಕೊಳ್ಳುತ್ತದೆ. ಕೇಂದ್ರ ಪ್ರಾಯೋಜಿತ ಉಚಿತ ಎಲ್ಪಿಜಿ ಸಂಪರ್ಕ ಯೋಜನೆಯ (ಪಿಎಂ ಉಜ್ವಲ ಯೋಜನೆ) ಪ್ರಯೋಜನಗಳನ್ನು ಪಡೆಯದ ಯಾವುದೇ ಬಿಪಿಎಲ್ ಹೊಂದಿರುವವರು ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಹೇಗೆ?
ಆನ್ಲೈನ್ ಅರ್ಜಿ ಪ್ರಕ್ರಿಯೆ: ಅನಿಲ ಭಾಗ್ಯ ಯೋಜನೆಗೆ ಅರ್ಜಿಗಳನ್ನು ಆನ್ಲೈನ್ ಮೋಡ್ ಮೂಲಕ ಕರ್ನಾಟಕ ರಾಜ್ಯ ಸರ್ಕಾರದ ಅಧಿಕೃತ ವೆಬ್ಸೈಟ್ ಅಥವಾ ಮೀಸಲಾದ ಸ್ಕೀಮ್ ಪೋರ್ಟಲ್ನಲ್ಲಿ ಆಹ್ವಾನಿಸಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಯೋಜನೆಗೆ ಆನ್ಲೈನ್ ನೋಂದಣಿ ಮಾಡಲು ಸೂಚಿಸಿದ ಹಂತಗಳನ್ನು ಅನುಸರಿಸಬಹುದು.
ಆಫ್ಲೈನ್ ಅರ್ಜಿ ಪ್ರಕ್ರಿಯೆ:
ಸ್ಕೀಮ್ಗಾಗಿ ಆಫ್ಲೈನ್ ಅರ್ಜಿ ನಮೂನೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಹತ್ತಿರದ ಗ್ರಾಮ ಪಂಚಾಯತ್ಗೆ ಸಲ್ಲಿಸಬಹುದಾಗಿದ್ದು, ನಗರ ಪ್ರದೇಶಗಳಲ್ಲಿ ವಾಸಿಸುವ ಜನರು ತಮ್ಮ ವಾರ್ಡ್ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಒಮ್ಮೆ ಅರ್ಜಿಗಳನ್ನು ಸಲ್ಲಿಸಿದ ನಂತರ, ಅರ್ಜಿದಾರರ ವಿವರಗಳನ್ನು SECC-2011 ದತ್ತಾಂಶ ಪಟ್ಟಿಯೊಂದಿಗೆ ಹೊಂದಾಣಿಕೆ ಮಾಡಲಾಗುವುದು, ಫಲಾನುಭವಿ ಈಗಾಗಲೇ PM Ujjwala Yojana ಅಡಿಯಲ್ಲಿ ಉಚಿತ LPG ಸಂಪರ್ಕವನ್ನು ಪಡೆದುಕೊಂಡಿಲ್ಲ ಎಂಬುದು ಖಾತರಿಯಾದರೆ ಉಚಿತ ಎಲ್ಪಿಜಿ ಸಂಪರ್ಕ ನೀಡಲಾಗುತ್ತದೆ. ಈಗಾಗಲೇ ಉಜ್ವಲ ಯೋಜನೆ ಪ್ರಯೋಜನಗಳನ್ನು ಪಡೆದಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ.
ಅರ್ಹತಗಳೇನು..?
- ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಸೇರಿದ ಕರ್ನಾಟಕದ ನಾಗರಿಕರಿಗೆ ಮಾತ್ರ ಯೋಜನೆಯ ಲಾಭ.
- ಎಲ್ಪಿಜಿ ಸಂಪರ್ಕ ಹೊಂದಿರದ ಪಿಎಚ್ಎಚ್ (ಆದ್ಯತೆಯ ಮನೆ) ಮತ್ತು ಎಎವೈ (ಅಂತ್ಯೋದಯ ಅನ್ನ ಯೋಜನೆ) ಪಡಿತರ ಚೀಟಿದಾರರು ಅರ್ಹರು.
- ಎಲ್ಪಿಜಿ ಸಂಪರ್ಕವಿಲ್ಲದ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿ ನೋಂದಣಿಯಾಗಿರುವ ಎಲ್ಲಾ ಕಟ್ಟಡ ಕಾರ್ಮಿಕರು.
- ಆಧಾರ್ ಸಂಖ್ಯೆಯನ್ನು ಹೊಂದಿರುವ ಅರ್ಜಿದಾರರು ಅರ್ಜಿ ಸಲ್ಲಿಸಬಹುದು.
- ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ.
- ನಮೂನೆಯನ್ನು ಸಲ್ಲಿಸಿದ ನಂತರ, ಫಲಾನುಭವಿಗಳ ಹೆಸರನ್ನು ಸಾಮಾಜಿಕ-ಆರ್ಥಿಕ ಜಾತಿ ಗಣತಿ 2011 ರ ದತ್ತಾಂಶದೊಂದಿಗೆ ಪರಿಶೀಲಿಸಲಾಗುತ್ತದೆ.