ಕಡಬ : ಕಂದಾಯ ಕಚೇರಿಗೆ ತಲವಾರ್ ಹಿಡಿದು ನುಗ್ಗಿದ ದುಷ್ಕರ್ಮಿಯಿಂದ ದಾಂಧಲೆ, ಕೊಲೆ ಯತ್ನ – ಕಲ್ಲು ಎತ್ತಿಹಾಕಿ ದುಷ್ಕೃತ್ಯ, ಬೇಕರಿಗೂ ಹಾನಿ

ನ್ಯೂಸ್ ಆ್ಯರೋ : ಕಡಬ ತಾಲೂಕಿನ ಸವಣೂರಿನಲ್ಲಿ ಜಾಗದ ತಕರಾರಿಗೆ ಸಂಬಂಧಪಟ್ಟಂತೆ ವ್ಯಕ್ತಿಯೊಬ್ಬ ಸವಣೂರು ಕಂದಾಯ ಕಛೇರಿಗೆ ನುಗ್ಗಿ ತಲವಾರಿನಿಂದ ಹಲ್ಲೆಗೆ ಮುಂದಾಗಿ ಕಲ್ಲು ಎತ್ತುಹಾಕಿ ಕೊಲೆಗೆ ಯತ್ನಿಸಿದ ಘಟನೆ ಸವಣೂರು ಜಂಕ್ಷನ್ ನಲ್ಲಿ ಬುಧವಾರ ನಡೆದಿದೆ.
ಸವಣೂರು ಗ್ರಾಮದ ಇಡ್ಯಾಡಿ ನಿವಾಸಿ ಪ್ರಸಾದ್ ಎಂಬಾತ ಕೊಲೆಗೆ ಯತ್ನಿಸಿದ ಆರೋಪಿ.
ಆರೋಪಿಯು ಈ ಕೃತ್ಯವಲ್ಲದೇ ಸವಣೂರು ಗ್ರಾ.ಪಂ.ಕಟ್ಟಡದಲ್ಲಿರುವ ಗುಣಪಾಲ ಗೌಡ ಇಡ್ಯಾಡಿ ಅವರಿಗೆ ಸೇರಿದ ಬೇಕರಿಯನ್ನು ತಲವಾರಿನಿಂದ ಪುಡಿಗೈದು ಕೊಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಸ್ಥಳಕ್ಕೆ ಬೆಳ್ಳಾರೆ ಠಾಣೆಯ ಎಸೈ ಸುಹಾಸ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ...
ಸುಬ್ರಹ್ಮಣ್ಯ : 20 ದಿನ ಕಳೆದರೂ ಇನ್ನೂ ಪತ್ತೆಯಾಗದ ಗ್ರಾ.ಪಂ. ಸದಸ್ಯೆ - ಬೆಂಗಳೂರಿನತ್ತ ತೆರಳಿರುವ ಮಾಹಿತಿ, ಆಂಧ್ರಕ್ಕೆ ಹೋಗಿದ್ದಾರಾ..!? ಬಂಟ್ವಾಳ : ವಿವಾಹಿತೆಯನ್ನು ಮದುವೆಯಾಗಿ ಆಕೆಯ ಮಗಳನ್ನೇ ಗರ್ಭವತಿಯಾಗಿಸಿದ ಕಾಮಿ - ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಮಲತಂದೆ ಅರೆಸ್ಟ್ ಕಡಬ : ಅಟೋ ರಿಕ್ಷಾ ಮತ್ತು ಪಿಕಪ್ ನಡುವೆ ಢಿಕ್ಕಿ - ನಾಲ್ಕು ವರ್ಷದ ಬಾಲಕನ ದುರ್ಮರಣ ಬಂಟ್ವಾಳ : ಇಂಟರ್'ವ್ಯೂಗೆ ಹೋಗುವುದಾಗಿ ಹೇಳಿ ಹೋದ ಯುವತಿ ನಾಪತ್ತೆ - ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು ವಿಟ್ಲ : ವೀರಕಂಬ ಕೆಲಿಂಜ ಉಳ್ಳಾಲ್ತಿ ದೇಗುಲದ ಕಾಣಿಕೆ ಡಬ್ಬ ದೋಚಿದ ಕಳ್ಳರು - ಘಟನಾ ಸ್ಥಳಕ್ಕೆ ಪೋಲಿಸರ ಭೇಟಿ, ಪರಿಶೀಲನೆ ಬೆಳ್ತಂಗಡಿ : ಬ್ಯಾನರ್ ಕಟ್ಟುತ್ತಿದ್ದ ವೇಳೆ ಕರೆಂಟ್ ಶಾಕ್ - ಒಬ್ಬ ದುರ್ಮರಣ, ಮತ್ತೊಬ್ಬನಿಗೆ ಗಾಯ
News Arrow
ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..