1. Home
  2. Mangaluru
  3. ಮಂಗಳೂರು : ಮನೆ ಮಂದಿ ಮದುವೆಗೆ ತೆರಳಿದ್ದ ವೇಳೆ ಯುವಕ‌ ನೇಣಿಗೆ ಶರಣು – ಸಾವಿಗೆ ಕಾರಣ ನಿಗೂಢ..

ಮಂಗಳೂರು : ಮನೆ ಮಂದಿ ಮದುವೆಗೆ ತೆರಳಿದ್ದ ವೇಳೆ ಯುವಕ‌ ನೇಣಿಗೆ ಶರಣು – ಸಾವಿಗೆ ಕಾರಣ ನಿಗೂಢ..

ಮಂಗಳೂರು : ಮನೆ ಮಂದಿ ಮದುವೆಗೆ ತೆರಳಿದ್ದ ವೇಳೆ ಯುವಕ‌ ನೇಣಿಗೆ ಶರಣು – ಸಾವಿಗೆ ಕಾರಣ ನಿಗೂಢ..
0

ನ್ಯೂಸ್ ಆ್ಯರೋ‌ : ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿ ಸೈಟ್ ಬಳಿ ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.

ಅಸೈಗೋಳಿ ಸೈಟ್ ನಿವಾಸಿ ಅಭಿಲಾಷ್ ( 36) ಎಂಬಾತ ಮೃತಪಟ್ಟ ಯುವಕನಾಗಿದ್ದಾನೆ.

ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದ ಈತ ಇತ್ತೀಚಿನ ಕೆಲ ಸಮಯದಿಂದ ಉದ್ಯೋಗಕ್ಕೂ ತೆರಳದೆ ಮನೆಯಲ್ಲೇ ಉಳಿದುಕೊಂಡಿದ್ದ ಎನ್ನಲಾಗಿದೆ.

ಎಂದಿನಂತೆ ಬೆಳಿಗ್ಗೆ ಜಾಗಿಂಗ್‌ಗೆ ತೆರಳಿದ್ದ ಈತ ಬುಧವಾರ ಕೂಡಾ‌ ಮನೆಗೆ ಮರಳಿದ್ದು, ಮನೆ ಮಂದಿ ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿದ್ದರು.

ಇದೇ ಸಂದರ್ಭದಲ್ಲಿ ಮನೆಯೊಳಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.