1. Home
  2. Mangaluru
  3. ಹಿಂದೂ ಜಾಗರಣ ವೇದಿಕೆಯಿಂದ ‘ದುರ್ಗಾ ದೌಡ್‌’ ಕಾರ್ಯಕ್ರಮ – ಅಕ್ಟೋಬರ್ 2ರಂದು ಉಡುಪಿಗೆ ಭೋಪಾಲದ ಸಂಸದೆ ಪ್ರಜ್ಞಾ ಸಿಂಗ್‌

ಹಿಂದೂ ಜಾಗರಣ ವೇದಿಕೆಯಿಂದ ‘ದುರ್ಗಾ ದೌಡ್‌’ ಕಾರ್ಯಕ್ರಮ – ಅಕ್ಟೋಬರ್ 2ರಂದು ಉಡುಪಿಗೆ ಭೋಪಾಲದ ಸಂಸದೆ ಪ್ರಜ್ಞಾ ಸಿಂಗ್‌

ಹಿಂದೂ ಜಾಗರಣ ವೇದಿಕೆಯಿಂದ ‘ದುರ್ಗಾ ದೌಡ್‌’ ಕಾರ್ಯಕ್ರಮ – ಅಕ್ಟೋಬರ್ 2ರಂದು ಉಡುಪಿಗೆ ಭೋಪಾಲದ ಸಂಸದೆ ಪ್ರಜ್ಞಾ ಸಿಂಗ್‌
0

ನ್ಯೂಸ್ ಆ್ಯರೋ : ಇದೇ ಮೊದಲ ಬಾರಿಗೆ ಹಿಂದೂ ಜಾಗರಣ ವೇದಿಕೆ ವತಿಯಿಂದ ಅಕ್ಟೋಬರ್ 2ರಂದು ಉಡುಪಿಯಲ್ಲಿ ಆಯೋಜಿಸಲಾದ “ದುರ್ಗಾ ದೌಡ್‌’ ಕಾರ್ಯಕ್ರಮಕ್ಕೆ ಭೋಪಾಲದ ಸಂಸದೆ, ವಾಗ್ಮಿ ಪ್ರಜ್ಞಾ ಸಿಂಗ್‌ ಠಾಕೂರ್‌ ಆಗಮಿಸುತ್ತಿದ್ದಾರೆ.

ನಗರವನ್ನು ಕೇಸರಿ ಪತಾಕೆಗಳಿಂದ ಅಲಂಕರಿಸಲಾಗಿದೆ. ಸಾವಿರಾರು ಜನರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಕೊರಗ ಸಮುದಾಯದ ಸುಂದರ ಕೊರಗ ಕಾರ್ಯಕ್ರಮ ಉದ್ಘಾಟಿಸುವರು.

ಹಿಂದೂ ಸಮಾಜದ ಎಲ್ಲ ಸಮುದಾಯಗಳ ಮುಖಂಡರು ಭಾಗವಹಿಸಲಿದ್ದಾರೆ. ಅಪರಾಹ್ನ 2.30ಕ್ಕೆ ಮೆರವಣಿಗೆ ಕಡಿಯಾಳಿಯಿಂದ ಆರಂಭಗೊಂಡು ಕಲ್ಸಂಕ, ಸಿಟಿ ಬಸ್‌ ನಿಲ್ದಾಣ, ತೆಂಕಪೇಟೆ, ರಥಬೀದಿವರೆಗೆ ತೆರಳಲಿದೆ. ಸಂಜೆ 5ಕ್ಕೆ ಕೃಷ್ಣಮಠ ಪಾರ್ಕಿಂಗ್‌ ಪ್ರದೇಶದಲ್ಲಿ ಸಮಾವೇಶವನ್ನು ಉದ್ದೇಶಿಸಿ ಪ್ರಜ್ಞಾ ಸಿಂಗ್‌ ಮಾತನಾಡಲಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..