1. Home
  2. Mangaluru
  3. Mangalore : ಹೆಸರು ಬೇಳೆ, ಐಸ್ ಕ್ರೀಮ್ ಸೇವಿಸಿ ಒಂದೇ ಮನೆಯ ನಾಲ್ವರು ಅಸ್ವಸ್ಥ – ಆಸ್ಪತ್ರೆಗೆ ದಾಖಲು, ಪ್ರಾಣಾಪಾಯದಿಂದ ಪಾರು

Mangalore : ಹೆಸರು ಬೇಳೆ, ಐಸ್ ಕ್ರೀಮ್ ಸೇವಿಸಿ ಒಂದೇ ಮನೆಯ ನಾಲ್ವರು ಅಸ್ವಸ್ಥ – ಆಸ್ಪತ್ರೆಗೆ ದಾಖಲು, ಪ್ರಾಣಾಪಾಯದಿಂದ ಪಾರು

Mangalore : ಹೆಸರು ಬೇಳೆ, ಐಸ್ ಕ್ರೀಮ್ ಸೇವಿಸಿ ಒಂದೇ ಮನೆಯ ನಾಲ್ವರು ಅಸ್ವಸ್ಥ – ಆಸ್ಪತ್ರೆಗೆ ದಾಖಲು, ಪ್ರಾಣಾಪಾಯದಿಂದ ಪಾರು
0

ನ್ಯೂಸ್ ಆ್ಯರೋ : ರಾತ್ರಿ ಊಟಕ್ಕೆ ಹೆಸರು ಬೇಳೆ, ಐಸ್ ಕ್ರೀಮ್ ತಿಂದ ಮನೆಮಂದಿಯೆಲ್ಲರೂ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಹಬ್ಬದ ಸಂಭ್ರಮದಲ್ಲಿ ಇದ್ದ ಮಂಗಳೂರಿನ ಜೆಪ್ಪು ಬಪ್ಪಲ್ ನ ಮನೆಯೊಂದರ ಬಾಗಿಲು ಇಂದು ಬೆಳಗಿನಿಂದಲೇ ಮುಚ್ಚಿತ್ತು.‌‌ ಅನುಮಾನಗೊಂಡ ಸಂಬಂಧಿಕರು ಬಾಗಿಲು ತೆರೆಸಿ ನೋಡಿದಾಗ ಆ ಮನೆಯಲ್ಲಿದ್ದ ನಾಲ್ವರೂ ಅಸ್ವಸ್ಥಗೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ಅಸ್ವಸ್ಥಗೊಂಡವರನ್ನು ಅರವಿಂದ ರಾವ್ (52), ಶ್ರೀಮತಿ ಪ್ರಭಾವತಿ(45), ಸೌರಭ್(20), ಪ್ರತೀಕ್ (18) ವರ್ಷ ಎಂದು ಗುರುತಿಸಲಾಗಿದೆ.

ಕೂಡಲೇ ಅವರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ICU ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥರಾದವರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರೆದಿದೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..