1. Home
  2. Mangaluru
  3. ನಾಳೆಯಿಂದ 10 ದಿನಗಳವರೆಗೆ ಮಂಗಳೂರು KSRTC ವಿಭಾಗ ವತಿಯಿಂದ ವಿಶೇಷ ದೀಪಾವಳಿ ಪ್ಯಾಕೇಜ್ – ವಿವರಗಳಿಗೆ ಈ ವರದಿ ಓದಿ..

ನಾಳೆಯಿಂದ 10 ದಿನಗಳವರೆಗೆ ಮಂಗಳೂರು KSRTC ವಿಭಾಗ ವತಿಯಿಂದ ವಿಶೇಷ ದೀಪಾವಳಿ ಪ್ಯಾಕೇಜ್ – ವಿವರಗಳಿಗೆ ಈ ವರದಿ ಓದಿ..

ನಾಳೆಯಿಂದ 10 ದಿನಗಳವರೆಗೆ ಮಂಗಳೂರು KSRTC ವಿಭಾಗ  ವತಿಯಿಂದ ವಿಶೇಷ ದೀಪಾವಳಿ ಪ್ಯಾಕೇಜ್ – ವಿವರಗಳಿಗೆ ಈ ವರದಿ ಓದಿ..
0

ನ್ಯೂಸ್ ಆ್ಯರೋ : KSRTC ಮಂಗಳೂರು ವಿಭಾಗದ ವತಿಯಿಂದ ದ.ಕ ಹಾಗೂ ನೆರೆಯ ಉಡುಪಿ – ಕೊಡಗು ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಹಾಗೂ ಧಾರ್ಮಿಕ ಸ್ಥಳಗಳಿಗೆ ದೀಪಾವಳಿ ವಿಶೇಷ ಟೂರ್ ಪ್ಯಾಕೇಜ್ ಆಯೋಜಿಸಲಾಗಿದೆ.

ಈ ವಿಶೇಷ ಪ್ಯಾಕೇಜ್ ದಿನಾಂಕ 21-10-2022 ರಿಂದ 31-10-2022 ದ ವರೆಗೆ ಇದ್ದು ದಿನಾಂಕ 25-10-2022 ರಂದು ಸೂರ್ಯಗ್ರಹಣ ಇರುವ ಕಾರಣ ಆ ದಿನ ಹೊರತುಪಡಿಸಿ ಉಳಿದ 10 ದಿನಗಳ ಕಾಲ ವಿಶೇಷ ಟೂರ್ ಪ್ಯಾಕೇಜ್ ಏರ್ಪಡಿಸಲಾಗಿದೆ.

ಮುಂಗಡ ಟಿಕೆಟ್ ಬುಕ್ಕಿಂಗ್ ಅವಕಾಶವು KSRTC ಯ ಅಧಿಕೃತ ವೆಬ್ಸೈಟ್ www.ksrtc.in ನಲ್ಲಿ ಒದಗಿಸಲಾಗಿದೆ. ಸದರಿ ಪ್ಯಾಕೇಜ್ ಪ್ರತಿದಿನ ಬೆಳಿಗ್ಗೆ 8 ಗಂಟೆಗೆ ಮಂಗಳೂರಿನಿಂದ ಹೊರಡಲಿದ್ದು, ಊಟ-ಉಪಚಾರ ಹೊರತುಪಡಿಸಿ, ದರ ನಿಗದಿಪಡಿಸಲಾಗಿದೆ.

ಟೂರ್ ಪ್ಯಾಕೇಜ್ ಗಳು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ

ಮಂಗಳೂರು – ಮಡಿಕೇರಿ ಟೂರ್ ಪ್ಯಾಕೇಜ್ 1

  • ರಾಜಸೀಟ್ -ಅಬ್ಬಿಫಾಲ್ಸ್- ನಿಸರ್ಗಧಾಮ- ಗೋಲ್ಡನ್ ಟೆಂಪಲ್- ಹಾರಂಗಿಡ್ಯಾಮ್
  • ಟಿಕೆಟ್ ದರ ವಯಸ್ಕರಿಗೆ 500
  • ಮಕ್ಕಳಿಗೆ 450

ಮಂಗಳೂರು-ಕೊಲ್ಲೂರು ಟೂರ್ ಪ್ಯಾಕೇಜ್ 1

  • ಮಾರಣಕಟ್ಟೆ- ಕೊಲ್ಲೂರು- ಕಮಲಶಿಲೆ- ಉಚ್ಚಿಲ
  • ಟಿಕೆಟ್ ದರ ವಯಸ್ಕರಿಗೆ 400
  • ಮಕ್ಕಳಿಗೆ 350

ಮಂಗಳೂರು-ಪುತ್ತೂರು ಟೂರ್ ಪ್ಯಾಕೇಜ್ 1

  • ವಿಟ್ಲ ಪಂಚಲಿಂಗೇಶ್ವರ- ಮೃತ್ಯುಂಜೇಶ್ವರ- ಉಮಾಮಹೇಶ್ವರಿ- ಪುತ್ತೂರು ಮಹಾಲಿಂಗೇಶ್ವರ- ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ- ಹನುಮಗಿರಿ.
  • ಟಿಕೆಟ್ ದರ ವಯಸ್ಕರಿಗೆ 400
    ಮಕ್ಕಳಿಗೆ 350

ಮಂಗಳೂರು ಟೂರ್ ಪ್ಯಾಕೇಜ್ 1

  • ಕದ್ರಿ ದೇವಸ್ಥಾನ- ಪಾಣೆಮಂಗಳೂರು ನಂದಾವರ ವಿನಾಯಕ- ಸುರ್ಯ- ಕನ್ಯಾಡಿ- ಧರ್ಮಸ್ಥಳ- ಸೌತಡ್ಕ- ಉಪ್ಪಿನಂಗಡಿ ಸಹಸ್ರಲಿಂಗೇಶ್ವರ- ಪುತ್ತೂರು ಮಹಾಲಿಂಗೇಶ್ವರ- ವಿಟ್ಲ ಪಂಚಲಿಂಗೇಶ್ವರ
  • ಟಿಕೇಟ್ ದರ ವಯಸ್ಕರಿಗೆ 400
  • ಮಕ್ಕಳಿಗೆ 350

ಮಂಗಳೂರು ಟೂರ್ ಪ್ಯಾಕೇಜ್ 2

  • ಕುಡುಪು- ಮೂಡಬಿದ್ರೆ ಮಾರಿಯಮ್ಮ ದೇವಸ್ಥಾನ- ಸಾವಿರ ಕಂಬ ಬಸದಿ- ಕೊಡ್ಯಡ್ಕ- ನೆಲ್ಲಿತೀರ್ಥಟಿಕೇಟ್ ದರ ವಯಸ್ಕರಿಗೆ 300
  • ಮಕ್ಕಳಿಗೆ 250

ಮಂಗಳೂರು ಟೂರ್ ಪ್ಯಾಕೇಜ್ 3

  • ಮಂಗಳಾದೇವಿ-ಪೊಳಲಿ -ಕಟೀಲು-ಉಚ್ಚಿಲ- ಬಪ್ಪನಾಡು-ಸಸಿಹಿತ್ಲು- ತಣ್ಣೀರುಬಾವಿ ಬೀಚ್- ಉರ್ವ ಮಾರಿಗುಡಿಟಿಕೆಟ್ ದರ ವಯಸ್ಕರಿಗೆ 300
  • ಮಕ್ಕಳಿಗೆ 250

ಸದ್ರಿ ಪ್ರಯೋಜನವನ್ನು ಸಾರ್ವಜನಿಕರು ಪಡೆಯಬಹುದೆಂದು KSRTC ಮಂಗಳೂರು ಇದರ ಹಿರಿಯ ವಿಭಾಗ ನಿಯಂತ್ರಣಾಧಿಕಾರಿಯವರು ಸಾರ್ವಜನಿಕರಿಗೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

News Arrow ಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..