1. Home
  2. National
  3. &
  4. International
  5. National
  6. News
  7. ಮಲಬಾರ್ ಜ್ಯುವೆಲ್ಲರಿ ಕಚೇರಿಯಲ್ಲಿತ್ತು 2.51 ಕೋಟಿ ಮೌಲ್ಯದ ಚಿನ್ನ ‌- ಜಾರಿ ನಿರ್ದೇಶನಾಲಯದಿಂದ ದಿಢೀರ್ ದಾಳಿ, ಚಿನ್ನ ವಶಕ್ಕೆ..!!

ಮಲಬಾರ್ ಜ್ಯುವೆಲ್ಲರಿ ಕಚೇರಿಯಲ್ಲಿತ್ತು 2.51 ಕೋಟಿ ಮೌಲ್ಯದ ಚಿನ್ನ ‌- ಜಾರಿ ನಿರ್ದೇಶನಾಲಯದಿಂದ ದಿಢೀರ್ ದಾಳಿ, ಚಿನ್ನ ವಶಕ್ಕೆ..!!

ಮಲಬಾರ್ ಜ್ಯುವೆಲ್ಲರಿ ಕಚೇರಿಯಲ್ಲಿತ್ತು 2.51 ಕೋಟಿ ಮೌಲ್ಯದ ಚಿನ್ನ ‌- ಜಾರಿ ನಿರ್ದೇಶನಾಲಯದಿಂದ ದಿಢೀರ್ ದಾಳಿ, ಚಿನ್ನ ವಶಕ್ಕೆ..!!
0

ನ್ಯೂಸ್ ಆ್ಯರೋ : ದೇಶದ ಖ್ಯಾತ ಚಿನ್ನದ ಮಳಿಗೆಗಳಲ್ಲಿ ಒಂದಾದ ಮಲಬಾರ್ ಜ್ಯುವೆಲ್ಲರಿ ಕಚೇರಿಯ ಸೀಕ್ರೆಟ್ ಚೇಂಬರ್ನಲ್ಲಿ ಬಚ್ಚಿಟ್ಟಿದ್ದ 2.51 ಕೋಟಿ ಮೌಲ್ಯದ ಅಕ್ರಮ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ED) ತಿಳಿಸಿದೆ. ರಾಜತಾಂತ್ರಿಕ ಚೀಲದ ಮೂಲಕ ಕಳ್ಳಸಾಗಣೆ ಪ್ರಕರಣದಲ್ಲಿ ಇಡಿ ಈ ಕ್ರಮವನ್ನು ಕೈಗೊಂಡಿದೆ.

ಕೇರಳದ ಮಲಪ್ಪುರಂ ಮೂಲದ ಮಲಬಾರ್ ಜ್ಯುವೆಲ್ಲರಿ ಮತ್ತು ಫೈನ್ ಗೋಲ್ಡ್ ಜ್ಯುವೆಲ್ಲರಿ ಪ್ರವರ್ತಕ ಅಬೂಬಕರ್ ಪಜೆದತ್ ಮತ್ತು ಕೋಝಿಕೋಡ್ ನ ಅಟ್ಲಾಸ್ ಗೋಲ್ಡ್ ಸೂಪರ್ ಮಾರ್ಕೆಟ್ಸ್ ಪ್ರೈವೇಟ್ ಲಿಮಿಟೆಡ್ ನ ಷೇರುದಾರರಲ್ಲಿ ಒಬ್ಬರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಫೆಡರಲ್ ಏಜೆನ್ಸಿ ಹೇಳಿಕೆಯಲ್ಲಿ ತಿಳಿಸಿದೆ.

ಚಿನ್ನವನ್ನು ವಶಪಡಿಸಿಕೊಳ್ಳುವ ಮೂಲಕ ಈ ದಂಧೆಯನ್ನ ಭೇದಿಸಲಾಗಿದ್ದು, ಜಾರಿ ನಿರ್ದೇಶನಾಲಯ (ಇಡಿ), ಎನ್‌ಐಎ ಮತ್ತು ಕಸ್ಟಮ್ಸ್ ಇಲಾಖೆ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ.

ಐಎಎಸ್ ಅಧಿಕಾರಿ ಎಂ.ಶಿವಶಂಕರ್ (ಕೇರಳ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ) ಅವರ ಆಶ್ರಯದಲ್ಲಿ ಸರಿತ್ ಪಿಎಸ್, ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ನೇತೃತ್ವದ ಚಿನ್ನ ಕಳ್ಳಸಾಗಣೆ ಸಿಂಡಿಕೇಟ್ನ ಭಾಗವಾಗಿದ್ದ ಮಲಪ್ಪುರಂನ ಅಬೂಬಕರ್ ಪಜೆದತ್ ಅವರು ಫಲಾನುಭವಿಗಳಲ್ಲಿ ಒಬ್ಬರು ಎಂದು ತನಿಖೆಯಿಂದ ತಿಳಿದುಬಂದಿದೆ’ ಎಂದು ಇಡಿ ಹೇಳಿದೆ.

‘ಜುಲೈ 05, 2020 ರಂದು ಕಸ್ಟಮ್ಸ್ ವಶಪಡಿಸಿಕೊಂಡ ಕಳ್ಳಸಾಗಣೆ ಮಾಡಿದ ಚಿನ್ನದಲ್ಲಿ 3 ಕೆಜಿ ಚಿನ್ನವು ಅಬೂಬಕರ್ ಪಜೆದತ್ಗೆ ಸೇರಿದೆ. ಕಸ್ಟಮ್ಸ್ ವಶಪಡಿಸಿಕೊಂಡ ಮೂರು ಕೆಜಿ ಚಿನ್ನವು ತನಗೆ ಸೇರಿದ್ದು ಎಂದು ಪಜೆದತ್ ಒಪ್ಪಿಕೊಂಡಿದ್ದಾನೆ ಮತ್ತು ಇದಲ್ಲದೆ, ಯುಎಇ ದೂತಾವಾಸದ ರಾಜತಾಂತ್ರಿಕ ಸಾಮಾನುಗಳ ಮೂಲಕ ಆರು ಕಿಲೋಗ್ರಾಂ ಚಿನ್ನವನ್ನು ಈ ಹಿಂದೆ ಇದೇ ರೀತಿ ಕಳ್ಳಸಾಗಣೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಏಜೆನ್ಸಿ ತಿಳಿಸಿದೆ.