ನ್ಯೂಸ್ ಆ್ಯರೋ : ಅಪರಿಚಿತ ವ್ಯಕ್ತಿಯೊಬ್ಬರ ದೇಹದ ಎಲುಬುಗಳು ಹಾಗೂ ತಲೆಬುರುಡೆ ಪತ್ತೆಯಾದ ಘಟನೆ ಪುತ್ತೂರಿನ ಕೇಪುಳು ಸಿದ್ಯಾಳ ಎಂಬಲ್ಲಿ ನಡೆದಿದೆ.
ಪುತ್ತೂರಿನ ಕೇಪುಳು ಸಿದ್ಯಾಳ ಎಂಬಲ್ಲಿ ವ್ಯಕ್ತಿಯೊಬ್ಬರ ದೇಹದ ಎಲುಬು ಪತ್ತೆಯಾಗಿದ್ದು, ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ವ್ಯಕ್ತಿಯನ್ನು ತಾರಿಗುಡ್ಡೆ ಪರಿಸರದವರೆಂದು ಶಂಕಿಸಲಾಗಿದೆ. ಹಳೆಯದಾದ ಎಲುಬು ಪತ್ತೆಯಾಗಿದ್ದು, ವ್ಯಕ್ತಿ ಮೃತಪಟ್ಟು ಸುಮಾರು ಸಮಯಗಳೇ ಕಳೆದಿದೆ ಎನ್ನಲಾಗುತ್ತಿದೆ.
ಎಲುಬು ಸಿಕ್ಕಿದ ಜಾಗದಲ್ಲಿ ಗಿಡಗಂಟಿಗಳು ತುಂಬಿದ್ದರಿಂದ ಯಾರಿಗೂ ಈವರೆಗೆ ತಿಳಿಯದೆ ಇದ್ದು, ಇಂದು ಹುಲ್ಲು ತೆಗೆಯುವ ವೇಳೆ ಘಟನೆ ಬೆಳಕಿಗೆ ಬಂದಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆ ನಂತರವಷ್ಟೇ ತಿಳಿದುಬರಬೇಕಿದ್ದು, ಇದೊಂದು ಕೊಲೆಯೋ ಆತ್ಮಹತ್ಯೆಯೋ ಎಂಬ ಕುತೂಹಲಕ್ಕೆ ಕಾರಣವಾಗಿದೆ.
News Arrowಸಮಗ್ರ ವಿವರಣೆ, ನೈಜ ಸುದ್ದಿ ಹಾಗೂ ವರ್ತಮಾನ ವಿದ್ಯಮಾನಗಳ ನೇರ ಹಾಗೂ ನಿಷ್ಠುರ ವಿಶ್ಲೇಷಣೆ ನೀಡುವ ವರದಿಗಾರರನ್ನೊಳಗೊಂಡ ತಂಡ ನ್ಯೂಸ್ ಆ್ಯರೋ.ಇನ್. ಸ್ಥಳೀಯ ವಿಷಯಗಳು ಅಥವಾ ಕಾರ್ಯಕ್ರಮಗಳ ವಸ್ತುನಿಷ್ಠ ವರದಿಯ ಜೊತೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಹಾಗೂ ರಾಜ್ಯದ ಯಾವುದೇ ಸುದ್ದಿಗಳನ್ನು ಓದುಗ ಮಿತ್ರರಿಗೆ ಯಥಾವತ್ತಾಗಿ ತಲುಪಿಸುವ ವಿಭಿನ್ನ ಪ್ರಯತ್ನ ನಮ್ಮದು..